‘ಹಿಂದಿನಿಂದಲೂ ಕಮಿಷನ್ ದಂಧೆಯಿತ್ತು. ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ರಾಜ್ಯದಲ್ಲಿ ಶೇ 10 ಪರ್ಸೆಂಟ್ ಸರ್ಕಾರವೆಂದು ಈ ಹಿಂದೆ ಆಪಾದಿಸಿದ್ದರು. ಆದರೆ, ಈಗ ಬಿಜೆಪಿ ಅವಧಿಯಲ್ಲಿ ಶೇ 40ರಷ್ಟು ಲಂಚ ಕೊಡಬೇಕು. ಅಷ್ಟೊಂದು ದೊಡ್ಡ ಮೊತ್ತದ ಕಮಿಷನ್ ನೀಡಿದರೆ, ಗುಣಮಟ್ಟದ ಕಾಮಗಾರಿ ಮಾಡುವುದಾದರೂ ಹೇಗೆ’ ಎಂದು ರವಿ ಚಂಗಪ್ಪ ಆಕ್ರೋಶ ಹೊರಹಾಕಿದರು.